
ಹೊಸನಗರ: ಜೆಸಿಐ ಹೊಸನಗರ ಡೈಮಂಡ್ ವತಿಯಿಂದ ಜೆಸಿ ಸಪ್ತಾಹದ ಮೊದಲ ಕಾರ್ಯಕ್ರಮವನ್ನು ಜೆಸಿಎಂ ರಸ್ತೆಯಲ್ಲಿ 9 ಸೆಪ್ಟೆಂಬರ್ 2025 ರಂದು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಪ್ರಗತಿಪರ ಕೃಷಿಕರಾದ ಶ್ರೀಯುತ ಜಗದೀಶ್ ರಾವ್ ಅವರು ಜೆಸಿಐ ಲೋಗೋ ಹೊಂದಿದ ಧ್ವಜಾರೋಹಣ ಮಾಡಿದರು.
ಅಧ್ಯಕ್ಷರಾದ ಜೆಸಿ ವಿನಾಯಕ ಕರಬ ಅವರು ಮಾತನಾಡಿ, “ಜೆಸಿ ಸಪ್ತಾಹ ಏಳು ದಿನಗಳವರೆಗೆ ನಡೆಯಲಿದ್ದು, ಪ್ರತಿವರ್ಷದಂತೆ ಈ ವರ್ಷವೂ ವಿಶಿಷ್ಟ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೆಸಿಐ ಹೊಸನಗರ ಡೈಮಂಡ್ ತಂಡ ಹಮ್ಮಿಕೊಂಡಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜೆಸಿ ಅಮಿತ್, ಪೂರ್ವಾಧ್ಯಕ್ಷರಾದ ಜೆಸಿ ಅರವಿಂದ್, ಜೆಸಿ ವಿನಾಯಕ ಅರಮನೆ, ಜೆಸಿ ವಿಶ್ವೇಶ್ವರ, ಜೆಸಿ ಗುರುರಾಜ್ ಹಾಗೂ ಅನೇಕ ಜೆಸಿ ಸದಸ್ಯರು ಉಪಸ್ಥಿತರಿದ್ದರು.
JCI DIAMOND..
