
ಹೊಸನಗರ: 2020 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಪರ್ಜನ್ಯ' ಸಿನಿಮಾದ "ಮೌನವು ಮಾತಾಗಿದೆ" ಹಾಡಿನ ಗೀತೆ ರಚನೆಗೆ ಗಾರ್ಗಿ ಕಾರೆ ಹಕ್ಲು ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ.

ಗಾರ್ಗಿ ಕಾರೆಹಕ್ಲುರವರು ಮೂಲತಹ ಹೊಸನಗರ ತಾಲ್ಲೂಕಿನ ಸಂಪೆಕಟ್ಟೆಯವರಾಗಿದ್ದು, ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿದರರಾಗಿ, ಉಪನ್ಯಾಸಕರಾಗಿ,ಧಾರಾವಾಹಿಗಳಿಗೆ ಸಂಭಾಷಣೆಕಾರ,ನಿರ್ದೇಶಕರಾಗಿ ಮತ್ತು ಖಾಸಗಿ ವಾಹಿನಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಇವರು ನಿರ್ದೇಶಿಸಿದ 'ಶೇಷು' ಸಿನಿಮಾಕ್ಕೆ ರಾಜ್ಯ ಪ್ರಶಸ್ತಿಯ ಮಾನ್ಯತೆ, 2018ರಲ್ಲಿ ನಿರ್ದೇಶಿಸಿದ 'ಅನುತ್ತರ' ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಡಿ ವಿ ಜಿ ಯವರ 'ಮಂಕುತಿಮ್ಮನ ಖಗ್ಗ' ಗುಂಡೋಪನಿಷತ್ ನ್ನು ಅಂತರ್ಜಾಲದ ಧಾರಾವಾಹಿಯಾಗಿ ಬರೆದು ನಿರ್ದೇಶಿಸಿದ್ದಾರೆ. ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಲ್ಲದೇ, ಒಂದು ಕಾದಂಬರಿ, ಎರಡು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಇತ್ತೇಚೆಗೆ ಇವರ ನಿರ್ದೇಶನದ ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ಕುರಿತಾದ 'ನಾಡಿ'ಸಾಕ್ಷ್ಯ ಚಿತ್ರ ಪ್ರದರ್ಶನ ಕಂಡಿದ್ದನ್ನು ನೆನಪಿಸಿಕೊಳ್ಳಬಹುದು. ಇವರು ಪ್ರಸ್ತುತ ಮಲೆನಾಡಿನ ಕಥೆ, ಕಲಾವಿದರು, ತಾಂತ್ರಿಕವರ್ಗವನ್ನು ಒಳಗೊಂಡು ಅನಿಮಿಷ ಚಿತ್ರ ಶಾಲೆ ತಂಡದ ಮೂಲಕ ಪ್ರಯೋಗಾತ್ಮಕ ಚಲನಚಿತ್ರ ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ..
STATE FILAM AWARD
