
ಹೊಸನಗರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ನಾಗರಕೊಡಿಗೆ ಗಣೇಶ್ ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪಟ್ಟಣದ ರಾಮಕ್ಷತ್ರಿಯ ಸಭಾ ಭವನದಲ್ಲಿ ಮಂಗಳವಾರ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಈ ಆಯ್ಕೆಯನ್ನು ಸಭೆಯಲ್ಲಿ ಪ್ರಕಟಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಮೂರ್ತಿ ಮಾತನಾಡಿ ಮುಂದಿನ ದಿನಗಳಲ್ಲಿ ಜಾತಿ ಬೇಧ ಮಾಡದೇ ಸದಸ್ಯತ್ವ ಹೆಚ್ಚಿಸುವ ಜವಾಬ್ದಾರಿ ಹೊರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕ ಅಧ್ಯಕ್ಷ ತಾ ಮ ನರಸಿಂಹ, ಮಂಜುನಾಥ ಕಾಮತ್, ಮಾರ್ಷಲ್ ಶರಂ, ಶಾಂತರಾಮ ಪ್ರಭು, ವೆಂಕಟೇಶ್ ಮೂರ್ತಿ, ಇಲಿಯಾಸ್. ಖಜಾಂಚಿ. ನಿಂಗಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
PRESIDENT
Discover more from Prasarana news
Subscribe to get the latest posts sent to your email.
