
ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ 7ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ನಡೆಸಲಾಗುತ್ತಿದ್ದು ಆಗಸ್ಟ್ 27-08-2025ರ ಬುಧವಾರದಿಂದ ಸೆಪ್ಟೆಂಬರ್ 10-08-2025ರ ಬುಧವಾರದ ವರೆಗಿನ 15 ದಿನಗಳ ಕಾಲ ಅಂಚೆ ಕಚೇರಿ ಸಮೀಪ ಇರುವ ವೀರಸಾವರ್ಕರ್ ಮಂಟಪದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷರಾದ ಪ್ರಶಾಂತ್ ತಿಳಿಸಿದರು.ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಮಿತಿಯ ತೀರ್ಮಾನದಂತೆ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಗಣೇಶ ಮೂರ್ತಿ ಪ್ರತಿಷ್ಠಾಪನಾ ದಿನದಿಂದ ವಿಸರ್ಜನಾ ದಿನದವರೆಗೆ ವಿಶೇಷವಾದಂತಹ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಆಗಸ್ಟ್ 27-08-2025ರ ಬೆಳಿಗ್ಗೆ 9:00ಗೆ ಸರಿಯಾಗಿ ಮಾವಿನ ಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಷ್ಠಾಪನ ಶೋಭಾ ಯಾತ್ರೆ ಮೂಲಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ. 30-08-25 ಶನಿವಾರ ಸಂಜೆ 7 ರಿಂದ 8 ರವರೆಗೆ ಕಲಾಭಾರತಿ ತಂಡ ಕಾರಣಗಿರಿಯವರಿಂದ ಭರತನಾಟ್ಯ. 31-08-2025 ರ ಮಧ್ಯಾಹ್ನ 3.30 ರಿಂದ 5.30 ವರೆಗೆ 5 ರಿಂದ 10 ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಹಾಗೆಯೇ ಅದೇ ದಿನ ರಾತ್ರಿ 8.35 ರಿಂದ ಶ್ರೀ ಹರಿಕೃಷ್ಣ ಮತ್ತು ಸಂಗಡಿಗರು ರೀಪನ್ ಪೇಟೆ ಇವರಿಂದ ಕೆರೋಕೆ ಸಂಗೀತ ಸಂಜೆ ಗಾಯನ ಕಾರ್ಯಕ್ರಮ ವಿರುತ್ತದೆ.02-09-2025 ಸಂಜೆ 7 ರಿಂದ 8 ರ ವರೆಗೆ ಶ್ರೀಮತಿ ಅನುಪಮಾ ಸುರೇಶ್ ರವರ ರಾಗಲಹರಿ ಗಮಕ ಕಲಾಸಂಘ ಇವರಿಂದ ಗಮಕ ಕಾರ್ಯಕ್ರಮ ಹಾಗೆ 03-09-2025 ಸಂಜೆ 7 ರಿಂದ 8 ರ ವರೆಗೆ ವಿದುಷಿ ಶಾಮಾ ಕಿರುಗುಡಿಗೆ ಇವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು 4-09-2025 ಮದ್ಯಾಹ್ನ 3 ರಿಂದ 5 ರ ವರೆಗೆ PU ಮತ್ತು ಪದವಿ ವಿದ್ಯಾರ್ಥಿ ನಿಯರಿಗೆ ಪ್ರಬಂಧ ಸ್ಪರ್ಧೆ (ವಿಷಯ: ವರ್ತಮಾನದ ಸವಾಲುಗಳು ಮತ್ತು ಪರಿಹಾರ) ಹಾಗೆಯೇ 05-09-2025 ಬೆಳಗ್ಗೆ 11 ರಿಂದ
ಗಣಹೋಮ ಹಾಗೂ ಸತ್ಯನಾರಾಯಣ ವೃತವನ್ನು ಮತ್ತು ಸಾರ್ವಜನಿಕ ಅನ್ನಸಂತಪಣೆಯನ್ನು ಹಮ್ಮಿಕೊಳ್ಳಲಾಗಿದೆ ಅದೇ ದಿನ ಸಂಜೆ 5 ರಿಂದ 7.45 ರ ವರೆಗೆ
ದಂಪತಿಗಳಿಗಾಗಿ ಸಾಂಪ್ರದಾಯಿಕ ವಸ್ತ್ರ ವೈಭವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.6-09-2025 ರ ಸಂಜೆ 4 ರಿಂದ 5.30 ರ ವರೆಗೆ 1 ರಿಂದ 4 ನೆ ತರಗತಿ ಮಕ್ಕಳಿಗೆ ಸ್ತೋತ್ರ ಶ್ಲೋಕಗಳ ಕಂಠಪಾಠ ಸ್ಪರ್ಧೆ ಸಂಜೆ 6 ರಿಂದ 7 ರ ವರೆಗೆ ಭಜನೆ. ರಾತ್ರಿ 9 ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು-ಮಂದಾರ್ತಿ ಇವರಿಂದ ಈ ವರ್ಷದ ನೂತನ ಕಥಾನಕ ಯಕ್ಷಗಾನ ಪ್ರಸಂಗ ಜಗನ್ಮಾತೆ ಶ್ರೀ ವಲದುರ್ಗಿ ಮಾಡಿ ತೋರಿಸಲಾಗುವುದು.
ದಿನಾಂಕ 10-09-2025 ರ ಬುಧವಾರ ಮದ್ಯಾಹ್ನ 4 ರಿಂದ ಬೃಹತ್ ವಿಸರ್ಜನ ಶೋಭ ಯಾತ್ರೆ, "ವಿಜಯ ಸಿಂಧೂರ ಯಾತ್ರೆ"ಆರಂಭವಾಗಲಿದೆ
ಈ ಶೋಭಾ ಯಾತ್ರೆಯಲ್ಲಿ ರಾಜ್ಯದ 15ಕ್ಕೆ ಹೆಚ್ಚು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆಗೂಡಿ ಗಣೇಶ ಮೂರ್ತಿಯನ್ನು ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಬಣೆಯಿಂದ ನಡೆಸಲಾಗುವುದು ಎಂದು ತಿಳಿಸಿದರು ಭಕ್ತಾದಿಗಳು 15 ದಿನಗಳ ಕಾಲದ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಗಣೇಶೋತ್ಸವವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರಿದರು..
ಈ ಸಂದರ್ಭದಲ್ಲಿ ಸಮಿತಿಯ ಗೌರವ್ಯಾಧ್ಯಕ್ಷರಾದ ಸುಧೀಂದ್ರ ಪಂಡಿತ್ ಕಾರ್ಯದರ್ಶಿ ವಿನಯ್ ಹೆಚ್ ವಿ, ನಾಗರಾಜ ಆರ್, ಸುರೇಂದ್ರ ಕೋಟ್ಯಾನ್, ವಿಕ್ರಂ ಹೆಚ್ ಜಿ, ಸಂತೋಷ್, ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು..
HINDHU MAHASABHA.
