ARAGA JNANENDRA:         ಭೂ ಕುಸಿತ ಉಂಟಾದ ಕುಂದಗಲ್ ಗ್ರಾಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಬೇಟಿ…

ಹೊಸನಗರ: ಬಾರಿ ಪ್ರಮಾಣದ ಭೂಕುಸಿತ ಉಂಟಾದ ಅರಮನೆ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಗಲ್ ನ ಘಟನಾ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಇಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಏರ್ಪಟ್ಟಿತ್ತು ಆಗ ತಜ್ಞರನ್ನು ಕರೆಸಿ ಸ್ಥಳವನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆಯಲಾಗಿತ್ತು ಆದರೆ ಈ ಬಾರಿ ಮಳೆಗಾಲ ಆರಂಭದಲ್ಲಿಯೇ ದೊಡ್ಡ ಪ್ರಮಾಣದ ಬಿರುಕು ಉಂಟಾಗಿರುವುದು ಆತಂಕ ಮೂಡಿಸಿದ ಎಂದರು.
ನಾಗರಿಕ ಸೌಲಭ್ಯವಿಲ್ಲದ ಈ ಊರಿನಲ್ಲಿ ಈಗಾಗಲೇ ವಿದ್ಯುತ್ ಸೇರಿ ಬಹಳಷ್ಟು ಸಮಸ್ಯೆಗಳು ಇದೆ ಜೊತೆಗೆ ಈ ಬಾರಿ ಇಂತಹದೊಂದು ಘಟನೆ ನಡೆದಿರುವುದು ಅವರಿಗೆ ಇನ್ನಷ್ಟು ಆತಂಕವನ್ನು ಉಂಟು ಮಾಡಿದೆ ಈ ಭಾಗದ ಸುತ್ತಮುತ್ತ ಸಣ್ಣ ಸಣ್ಣ ಹಿಡುವಳಿದಾರರಿದ್ದು ಅವರು ತಮಗಿರುವ ಅಲ್ಪಸಲ್ಪಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಕಂಡರೆ ಇನ್ನು ಮೂರ್ ನಾಲ್ಕು ದಿನಗಳಲ್ಲಿ ಸಂಪೂರ್ಣವಾಗಿ ಇಲ್ಲಿ ಭೂಮಿ ಕುಸಿಯುವ ಸಂಭವವಿದ್ದು ಇಲ್ಲಿಗೆ ಯಾರು ಬರಲು ಸಾಧ್ಯವಿಲ್ಲ ಆದ್ದರಿಂದ ಸರ್ಕಾರ ಈ ಭಾಗಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಿ ನುರಿತ ತಜ್ಞರನ್ನು ಕರೆಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಒಂದು ವೇಳೆ ಇದನ್ನ ಸರಿಪಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾದರೆ ಇಲ್ಲಿರುವವರಿಗೆ ಸೂಕ್ತವಾದ ಪರಿಹಾರವನ್ನು ನೀಡಿ ಅವರನ್ನು ಬೇರೆ ಕಡೆ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ತಾಲೂಕು ದಂಡಾಧಿಕಾರಿಗಳಾದ ರಶ್ಮಿ ೆಚ್‌ಜೆ ಇಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರ ಆದೇಶದಂತೆ ಬೆಂಗಳೂರಿನಿಂದ ತಜ್ಞರನ್ನು ಕರೆಸಿ ಭೂಕುಸಿತ ನಿಯಂತ್ರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಸುಬ್ರಹ್ಮಣ್ಯ ಮತ್ತಿಮನೆ, ಮುಖಂಡರಾದ ಹಾಲಗದ್ದೆ ಉಮೇಶ್, ರಮಕಾಂತ್, ರಾಜೇಶ್,ನಿತಿನ್ ನಗರ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ARAGA JNANENDRA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading