DEATH NEWS:ನಿಧನ ವಾರ್ತೆ
‘ಬಿಂಬ’ ಯೋಗೀಶ್ ಗೆ ಮಾತೃ ವಿಯೋಗ.

ಹೊಸನಗರ : ಪಟ್ಟಣದ ಚೌಡಮ್ಮ ರಸ್ತೆಯ 'ಬಿಂಬ' ಪೋಟೋ ಸ್ಟೂಡಿಯೋ ಮಾಲೀಕ, ಹೆಸರಾಂತ ಛಾಯಾಗ್ರಾಹಕ ಕೆ.ಬಿ.ಯೋಗೀಶ್ ಅವರ ತಾಯಿ ಹಾಗು ದಿವಂಗತ ವಿದ್ವಾನ್ ಭದ್ರಾಚಾರ್  ಅವರ ಧರ್ಮಪತ್ನಿ
ಸುಮಿತ್ರಾ ಆಚಾರ್ಯ(92) ಇತ್ತೀಚೆಗೆ
ಮಂಗಳೂರಿನ  ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಸುನೀಗಿದರು. ಮೃತರಿಗೆ ತಲಾ ಇಬ್ಬರು ಪುತ್ರರು ಹಾಗು ಪುತ್ರಿಯರು ಇದ್ದಾರೆ.
ಮಂಗಳೂರಿನಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆದಿದ್ದು ಇದೇ ಸೆಪ್ಟೆಂಬರ್ 25ರ ಗುರುವಾರ ಮಧ್ಯಾಹ್ನ 12-30ಕ್ಕೆ ಇಲ್ಲಿನ ಶರಾವು ದೇವಸ್ಥಾನದ ಬಳಿ ಇರುವ  ಶ್ರೀ ರಾಧಾಕೃಷ್ಣ ಹಾಲ್ (ಬಾಳಂಭಟ್) ಹಾಲ್ ನಲ್ಲಿ ವಿಶ್ವಕರ್ಮ ಸಮಾರಾಧನೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

DEATH NEWS....


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe