
ಹೊಸನಗರ: ಬ್ರಾಹ್ಮಣ ಸಮುದಾಯಕ್ಕೆ ನಿರಂತರವಾಗಿ ನಿಸ್ಪೃಹತೆಯಿಂದ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ತಾಲ್ಲೂಕಿನ ನಿಟ್ಟೂರು ಗ್ರಾಮ ವಾಸಿ ರವೀಶ್ ಕುಮಾರ್ ಎನ್.ಎಸ್. ಅವರನ್ನು ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಒಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಎಸ್. ರಘುನಾಥ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಮಹಾ ಸಭೆಯನ್ನು ಸದೃಢ ಹಾಗು ಬಲಾಢ್ಯ ಸಂಸ್ಥೆಯಾಗಿ ಬೆಳೆಯುಲು ತಮ್ಮ ಅಮೂಲ್ಯ ಸೇವೆ ನೀಡಿ ಮಹಾಸಭಾದ ಯೋಜನೆಗಳು ಹೆಚ್ಚಿನ ವಿಪ್ರರಿಗೆ ದೊರೆಯುವಂತೆ ಕಾರ್ಯ ನಿರ್ವಹಿಸಲು ಅವರು ಕೋರಿದ್ದಾರೆ.
BRAHMANA MAHASABHA
