RIPPONPET NEWS:          ಬಿಜೆಪಿಯವರ ಸುಳ್ಳು ಆರೋಪ.. `ಅಸ್ಪತ್ರೆ ಆಭಿವೃದ್ದಿಗೆ ಶಾಸಕ ಗೋಪಾಲಕೃಷ್ಣ ಹೆಚ್ಚು ಅಸಕ್ತಿ ವಹಿಸಿದ್ದಾರೆ: ಧನಲಕ್ಷ್ಮೀ ಗಂಗಾಧರ್

`
ರಿಪ್ಪನ್‌ಪೇಟೆ;-ಇಲ್ಲಿನ 24×7 ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸಾಕಷ್ಟು ಭಾರಿರಾಜ್ಯಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.ಅಲ್ಲದೆ ಈಗಾಗಲೇ ಅಸ್ಪತ್ರೆಯಲ್ಲಿಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿದ್ದು ಹೆಚ್ಚವರಿಖಾಯಂ ವೈದ್ಯರನ್ನು ಶೀಘ್ರದಲ್ಲಿ ನೇಮಕಮಾಡಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆಇದು ವಿರೋದಪಕ್ಷದವರುದುರುದ್ದೇಶದಿಂದತಪ್ಪಾಗಿ ಹೇಳಿಕೆ ನೀಡಿ ಶಾಸಕರ ಕಾರ್ಯ ವೈಖರಿಯನ್ನು ಸಹಿಸದೇ ಈ ರೀತಿಯ ಹೇಳಿಕೆ ನೀಡಿದ್ದಾರೆಂದುಗ್ರಾಮ ಪಂಚಾಯ್ತಿ ಅಧ್ಯಕ್ಷೆಧನಲಕ್ಷಿö್ಮ  ಹೇಳಿದರು..
ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡದ ಅವರು ಅಸ್ಪತ್ರೆಯಅರೋಗ್ಯ ಸಮಿತಿಯವರು ಅಗಾಗ ಅಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳಿಗೆ ಪರಿಹಾರಕಲ್ಪಿಸಲಾಗುತ್ತಿದ್ದು ಈಗಾಗಲೇ ಪ್ರೀಜ್ ಮತ್ತುಜನರೇಟರ್ ಹಾಗೂ ವಾಸಿಂಗ್ ಮಿಷನ್ ಹೀಗೆ ಹತ್ತು ಹಲವು ಮೂಲಭೂತ ಸೌಲಭ್ಯಗಳನ್ನು ಅಸ್ಪತ್ರೆಗೆ ಒದಗಿಸಲಾಗಿದೆ.ಉಳಿದಂತೆ ನಿತ್ಯ ಬರುವ ರೋಗಿಗಳ ಬಳಿಯಿಂದ ಚೀಟಿ ಬಾಬ್ತು ೧ ಲಕ್ಷಕ್ಕೂಆಧಿಕ ಹಣ ಸಂಗ್ರಹವಾಗಿದ್ದುಅದನ್ನು ಬ್ಯಾಂಕ್ಎಸ್.ಬಿ.ಖಾತೆಗೆ ಜಮಾಮಾಡಿಕೊಳ್ಳಲಾಗಿದೆ ಆ ಹಣವನ್ನುಅಗತ್ಯ ಸೌಲಭ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುವುದೆಂದು ಹೇಳಿ ಬಿಜೆಪಿಯ ವೀರೇಶ್ ಅಲಿವಳ್ಳಿ ಮತ್ತುಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿಯವರಿಗೆಅಸ್ಪತ್ರೆಯ ಬಗ್ಗೆ ಮಾತನಾಡಲು ನೈತಿಕತೆಯೆಇಲ್ಲಅರೋಪ ಮಾಡುವುದೇಒಂದುಗುರಿಯಾಗಿದೆ.ಈ ಹಿಂದೆಐದು ವರ್ಷಗಳ ಕಾಲ ಅಧಿಕಾರ ಮಾಡಿದ ಶಾಸಕ ಹರತಾಳು ಹಾಲಪ್ಪನವರುಅಸ್ಪತ್ರೆಗೆಒಮ್ಮೆಯೂ ಭೇಟಿ ನೀಡದೆಇದ್ದುಕಾಗೋಡುತಿಮ್ಮಪ್ಪನವರಅವಧಿಯಲ್ಲಿ ಮಂಜೂರಾದಅಸ್ಪತ್ರೆಯಜಾಗಎಲ್ಲಿದೆ ಹೇಗೆ ಇದೆ ಎಂಬ ಬಗ್ಗೆ ಚಕಾರಎತ್ತದ ಬಿಜೆಪಿಯವರಿಗೆ ಈಗ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳ ಕುರಿತು ಮಾತನಾಡುವ ನೈತಿಕತೆಎಲ್ಲಿಂದ ಬಂತುಎAದು ಪ್ರಶ್ನಿಸಿ ನಮ್ಮ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅಯ್ಕೆಯಾಗುತ್ತಿದ್ದಂತೆಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರಕಲ್ಪಿಸುವ ಮೂಲಕ ೧೮ ವರ್ಷಗಳ ಕಾಲ ಬೇರೂರಿದ್ದ ವೈದ್ಯಾಧಿಕಾರಿಯನ್ನು ನಿಯೋಜನೆ ಮೇಲೆ ಕಳುಹಿಸಿ ಬೇರೆಯವರನ್ನು ಹಾಕಿಸಿಕೊಂಡು ಬಂದಿರುತ್ತಾರೆ.ಇನ್ನೂ ನರ್ಸುಗಳ ಸಮಸ್ಯೆಯಿತ್ತುಅದನ್ನು ಸಹ ಪರಿಹರಿಸಿದ್ದಾರೆ.ಅದರೆ ವಿರೋಧ ಪಕ್ಷದ ಬಿಜೆಪಿಯವರು ಸರಿಯಾಗಿ ಅರ್ಥಮಾಡಿಕೊಳ್ಳದೆ ದುರುದ್ದೇಶದಿಂದ ಶಾಸಕರ ಮೇಲೆ ಅರೋಪ ಮಾಡಿಇರುವ ವೈದ್ಯಾಧಿಕಾರಿಗಳನ್ನು ಕರ್ತವ್ಯದಿಂದಓಡಿಸಲು   ಹೊರಟಿದ್ದಾರೆಂದು ಆರೋಪಿಸಿದರು
ಪತ್ರಿಕಾ ಗೋಷ್ಠಿಯಲ್ಲಿಗ್ರಾಮ ಪಂಚಾಯಿತ್ ಸದಸ್ಯರಾದಗಣಪತಿ ಗವಟೂರು,ಎನ್.ಚಂದ್ರೇಶ್,ಡಿ.ಈ.ಮಧುಸೂದನ,ಆಶೀಫ್‌ಭಾಷಾ,ಪ್ರಕಾಶ ಪಾಲೇಕರ್,ಸಾರಾಬಿಹೈದರಾಲಿ, ಎಂ. ಎಂ.. ಪರಮೇಶ,ಬಿಎಸ್‌ಎನ್‌ಎಲ್ಶ್ರೀಧರ, ನವೀನ.ಕೆರೆಹಳ್ಳಿ ಇನ್ನಿತರರು ಹಾಜರಿದ್ದರು.

RIPPONPET NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe