
ಹೊಸನಗರ:ಜಾತಿ ಹಾಗೂ ಆರ್ಥಿಕ ಸಮೀಕ್ಷಾ ಗಣತಿಯಲ್ಲಿ ಕಾಲಂ ನಂ 9ರಲ್ಲಿ ಜಾತಿ ಈಡಿಗ ಹಾಗೂ ಕಾಲಂ ನಂ 10ರಲ್ಲಿ ಉಪಜಾತಿ ದೀವರು ಎಂದು ನಮೂದಿಸಲು ತಾಲೂಕು ದೀವರ ಯುವ ವೇದಿಕೆ ಸಮಾಜ ಬಾಂಧವರಿಗೆ ತಿಳಿಸಿದೆ.
ಈ ಕುರಿತಾಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ದೀವರ ಯುವ ವೇದಿಕೆ ಅಧ್ಯಕ್ಷರಾದ ರಮೇಶ್ ನೇರಲೆ ಜಾತಿ ಗಣತಿಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಾಹಿತಿ ನೀಡಬೇಕು ಎಂಬುದರ ಬಗ್ಗೆ ಸಮಾಜ ಬಾಂಧವರಲ್ಲಿ ಗೊಂದಲಗಳು ಉಂಟಾಗಬಾರದು ಅಲ್ಲದೆ
ಈ ಸಮೀಕ್ಷೆ ಸಮುದಾಯಗಳ ಶೆಕ್ಷಣಿಕ, ಆರ್ಥಿಕ,ಸಾಮಾಜಿಕ ಸ್ಥಿತಿಗತಿ ಗುರುತಿಸುವಲ್ಲಿ ಪ್ರಮುಖವಾಗಿದ್ದು, ಗಣತಿದಾರರು ಬಂದಾಗ ತಮ್ಮ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಬೇಕು ಕಾಲಂ ನಂ 9 ರಲ್ಲಿ ಈಡಿಗ ಎಂದು ಮತ್ತು ಕಾಲಂ ನಂ 10 ರಲ್ಲಿ ದೀವರು ಎಂದು ನಮೂದಿಸಬೇಕೆಂಬ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ
ಷಣ್ಮುಖ ಯಡಗುಡ್ಡೆ.ಧನಂಜಯ ಮಂಡಾನಿ.ದಿನೇಶ್ ಮಂಡಾನಿ
ಕವೀಶ್ ಕನಸು.ಶಶಿಕುಮಾರ್ ಶಾಂತನಗದ್ದೆ .ಸುಮಂತ ಕೆ ಉಪಸ್ಥಿತರಿದ್ದರು.
CASTE SURVEY..
