PROTEST:ಜನಿವಾರ ಪ್ರಕರಣ: ಹೊಸನಗರ ಬ್ರಾಹ್ಮಣ ಮಹಾಸಭಾದಿಂದ ಬೃಹತ್ ಪ್ರತಿಭಟನೆ..

ಹೊಸನಗರ:ಬೀದರ್ ಮತ್ತು ಶಿವಮೊಗ್ಗದಲ್ಲಿ
CET ಬರೆಯುವ ಬ್ರಾಹ್ಮಣ ವಿದ್ಯಾತ್ತಿಗಳ ಜನಿವಾರವನ್ನು ಕಿತ್ತು ತೆಗೆದ ಪರೀಕ್ಷಾ ಮೇಲ್ವಿಚಾರಕರು ಮತ್ತು ಅಲ್ಲಿನ ಜಿಲ್ಲಾಡಳಿತದ ವಿರುದ್ದ ಇದೆ ಏಪ್ರಿಲ್ 21 ನೆ ತಾರೀಕು ಸೋಮವಾರ ಹೊಸನಗರ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಹೊಸನಗರದ ಗಾಯತ್ರಿ ಮಂದಿರದಿಂದ ತಾಲ್ಲೂಕು ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮಿತಿ ಮೀರುತ್ತಿರುವ ಬ್ರಾಹ್ಮಣರ ತೇಜೋವಧೆಯನ್ನು ಖಂಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ರೂಪುರೇಷೆಯನ್ನು ಆ ದಿನ ರೂಪಿಸಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ನಿಸದೇಶಕರು, ತಾಲ್ಲೂಕು ಬ್ರಾಹ್ಮಣ ಸಂಘದ ಕಾರ್ಯಧಾರ್ಶಿಗಳೂ ಆಗಿರುವ ಶ್ರೀಯುತ ಕೆ.ಎನ್.ಸ್ವರೂಪ್ ತಿಳಿಸಿದ್ದಾರೆ...

PROTEST..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading