
ಹೊಸನಗರ: ತಾಲೂಕಿನ ಮಾಜಿ ಶಾಸಕ, ಹಿರಿಯ ರಾಜಕಾರಣಿ ಬಿ.ಸ್ವಾಮಿರಾವ್ ಅವರ ಧರ್ಮಪತ್ನಿ ಪುಣ್ಯವತಿ(84) ಡಿಸೆಂಬರ್ 7ರ ಭಾನುವಾರ ನಿಧನರಾದ ಹಿನ್ನಲೆಯಲ್ಲಿ 21ರ ಭಾನುವಾರ ಸೊನಲೆಯ ಸ್ವಗೃಹದಲ್ಲಿ ಬೆಳಗ್ಗೆ 11ಕ್ಮೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ, ನುಡಿ ನಮನ ಹಾಗು ವೈಕುಂಠ ಸಮಾರಾಧನೆ ಹಮ್ಮಿಕೊಳ್ಳಲಾಗಿದೆ. ಆಪ್ತೇಷ್ಟರು, ಈಡಿಗ - ದೀವರು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಭಾಗವಹಿಸಿ ಮೃತ ಆತ್ಮಕ್ಕೆ ಶಾಂತಿ ಕೋರ ಬೇಕೆಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಪುತ್ರ ಸುರೇಶ್ ಸ್ವಾಮಿರಾವ್ ಕೋರಿದ್ದಾರೆ..
NUDINAMANA.
