AMBEDKAR JAYANTI: ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ..

ಹೊಸನಗರ:ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ.ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿಜಿ ನಾಗರಾಜ್, ಬಾಬು ಕಾಮತ್, ಸದಾಶಿವ ಶೆಟ್ಟಿ, ಎಂಪಿ ಸುರೇಶ್  ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ವಿನಿ ಕುಮಾರ್, ಗುಲಾಬಿ ಮರಿಯಪ್ಪ, ಕಾಂಗ್ರೆಸ್ ಟೌನ್ ಘಟಕದ ಅಧ್ಯಕ್ಷರಾದ ಗುರುರಾಜ್, ನಾಗರಾಜ್, ಟಿಕಪ್ಪ, ಇಕ್ಬಾಲ್ ಮುಂತಾದವರು ಉಪಸ್ಥಿತರಿದ್ದರು...

AMBEDKAR JAYANTI...


Discover more from Prasarana news

Subscribe to get the latest posts sent to your email.

  • Related Posts

    HOSANAGARA: ಮನೆ ಮೇಲಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು…

    ಹೊಸನಗರ: ಹಳೆ ಮನೆಯ ಮೇಲ್ಚಾವಣಿ ರಿಪೇರಿ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ  ತಾಲೂಕಿನ ಕಲ್ಲುವಿಡಿ ಅಬ್ಬಿಗಲ್ಲು ಗ್ರಾಮದ ಇಟ್ಟಕ್ಕಿಯಲ್ಲಿ ನಿನ್ನೆ ನಡೆದಿದೆ.ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್ ( 35) ಇಟ್ಟಕ್ಕಿಯ ಪರಿಚಯಸ್ತರ ಹಳೆ ಮನೆಯ ರಿಪೇರಿ…

    Read more

    DEATH NEWS:ತಬಲವಾದಕ ಶ್ರೀಧರ್ ಜೋಯಿಸ್ ನಿಧನ…!!

    ಹೊಸನಗರ:  ತಾಲ್ಲೂಕಿನ ನಾಗರಕೊಡಿಗೆ ನಿವಾಸಿ ಶ್ರೀಧರ  ಜೋಯಿಸ್ ( 70) ಭಾನುವಾರ ಬೆಳಿಗ್ಗೆ ನಿಧನಹೊಂದಿದರು.ಇವರಿಗೆ ಪತ್ನಿ, ಒರ್ವ ಪುತ್ರ,ಪುತ್ರಿ ಇದ್ದಾರೆ.ಮೃತರ ಅಂತ್ಯಕ್ರಿಯೆ ಸ್ಥಳೀಯ ಹಿಂದು ರುದ್ರಭೂಮಿಯಲ್ಲಿ ನಡೆಯಿತು.ಶ್ರೀಧರ ಜೋಯಿಸ್ ರು ಪುರೋಹಿತ ವೃತ್ತಿಯಲ್ಲಿ ಹೆಸರು ಮಾಡಿದ್ದರು. ನಾಟಿ ಔಷಧಿ ಪಂಡಿತರಾಗಿದ್ದರು ಅಲ್ಲದೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading