ROBBERY:ಉಳ್ಳಾಲ ಬ್ಯಾಂಕ್ ದರೋಡೆ….
12 ಕೋಟಿ ಅಧಿಕ ಮೌಲ್ಯದ ಹಣ ಬಂಗಾರ ಕಳವು….

ಉಳ್ಳಾಲ: (ದ ಕ):ತಲಪಾಡಿ ಸಮೀಪದ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ಗೆ ಶುಕ್ರವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರ ತಂಡ ಪಿಸ್ತೂಲು, ತಲವಾರು, ಚಾಕು ತೋರಿಸಿ 10 ರಿಂದ 12 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 11 ಲಕ್ಷ ರೂ.ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕೇರಳ ಕಡೆಗೆ ಕಾರಿನಲ್ಲಿ ಪರಾರಿಯಾಗಿದೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿ ಕೋಟೆಕಾರ್ ಬೀದಿಯಲ್ಲಿದ್ದು, ವಿವಿಧ ಕಡೆ ಶಾಖೆಗಳನ್ನು ಹೊಂದಿದೆ. ಆ ಪೈಕಿ ಕೆ.ಸಿ.ರೋಡ್ ಜಂಕ್ಷನ್ ನಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿರುವ ಶಾಖೆ ಸೇರಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಐವರು ಯುವಕರ ತಂಡ ಏಕಾಏಕಿ ಬ್ಯಾಂಕ್‌ಗೆ ನುಗ್ಗಿದೆ. ಬ್ಯಾಂಕ್ ನಲ್ಲಿ ಮೂವರು ಮಹಿಳೆಯರು, ಓರ್ವ ಪುರುಷ ಸಿಬ್ಬಂದಿ ಹಾಗೂ ಟೆಕ್ನಿಷಿಯನ್ ಇದ್ದರು. ಈ ಸಂದರ್ಭ ಸಿಬ್ಬಂದಿ ಬೊಬ್ಬೆ ಹಾಕಿದ್ದಾರೆ. ಬ್ಯಾಂಕ್‌ನ ಕೆಳ ಅಂತಸ್ತಿನ ಬೇಕರಿಗೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಿಬ್ಬಂದಿಯ ಬೊಬ್ಬೆ ಕೇಳಿ ಬ್ಯಾಂಕ್‌ಗೆ ಓಡಿ ಬಂದಿದ್ದಾರೆ. ಈ ಸಂದರ್ಭ ದರೋಡೆಕೋರರು ವಿದ್ಯಾರ್ಥಿಗಳಿಗೆ ಪಿಸ್ತೂಲ್ ಪ್ರದರ್ಶಿಸಿ ಬೆದರಿಸಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಒಂದು ಕಪಾಟು ತೆರೆಯದ ಕಾರಣ ಒಂದಷ್ಟು ನಗದು ಮತ್ತು ಚಿನ್ನಾಭರಣವನ್ನು ಬಿಟ್ಟು ಹೋಗಿದ್ದಾರೆ...

ROBBERY..


Discover more from Prasarana news

Subscribe to get the latest posts sent to your email.

  • Related Posts

    CRIME NEWS:ಗಾಂಜಾ ಅಮಲಿನಲ್ಲಿದ್ದವನಿಗೆ ಕಾದಿತ್ತು ಶಾಕ್!!
    ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೊಂದು ಗಾಂಜಾಸೇವನೆ ಪ್ರಕರಣ…..

    ಹೊಸನಗರ: ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.ನಾಗೋಡಿ ಗ್ರಾಮದ ಮಾಗಲು ನಿವಾಸಿ ಅಜಿತ್ ಕುಮಾರ್ ಎಂ.ಪಿ (28) ಬಂಧಿತ ಆರೋಪಿ. ನಗರ ಠಾಣೆ ಪಿಎಸ್ಐ ಶಿವಾನಂದ್ ವೈ.ಕೆ ಹಾಗೂ ಸಿಬ್ಬಂದಿಗಳಾದ ಎಎಸ್ಐ ಕುಮಾ‌ರ್, ವಿಶ್ವನಾಥ್, ಪ್ರವೀಣ್,…

    Read more

    NAGARA POLICE:ಕಳವು ಪ್ರಕರಣ ಆರೋಪಿ ಬಂಧನ..
    ಒಂದು ಲಕ್ಷ ಮೌಲ್ಯದ ಬಂಗಾರ ಹಾಗೂ ಬೈಕ್ ವಶ…

    ಹೊಸನಗರ: ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಿದ್ದಾರೆ. ಮಾ.03 ರಂದು ತಾಲ್ಲೂಕಿನ ಮತ್ತಿಕೈ ಗ್ರಾಮದ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಅವರು ಸಂಬಂಧಿಕರ ಮನೆಯಲ್ಲಿ ಉಪನಯನ ಕಾರ್ಯಕ್ರಮಕ್ಕೆಂದು ತೆರಳಿದ್ದು ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಬಂದಾಗ ಕಳ್ಳತನ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading