HUMANITY:ಮಾನವೀಯತೆ ಮೆರೆದ ಗುರೂಜಿ ಶಾಲೆಯ ವಿದ್ಯಾರ್ಥಿಗಳು…

ಹೊಸನಗರ: ಪಟ್ಟಣದ  ಹಳೆ ಸಾಗರ ರಸ್ತೆಯ  ಚರಂಡಿ ಯೊಂದರಲ್ಲಿ ಹಸುವೊಂದು  ತಲೆಕೇಳಗಾಗಿ ಬಿದ್ದು ಒದ್ದಾಡುತಿತ್ತು  ಇದನ್ನು ಗಮನಿಸಿದ  ಪಟ್ಟಣದ ಶ್ರೀ ಗುರೂಜಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಜೀವನ್, ಸುಶಾಂತ್, ಅಮಿತ್ ಕಾಮತ್.ಕಿಶನ್.10ನೇ ತರಗತಿಯ ಈ ವಿದ್ಯಾರ್ಥಿಗಳು ಆ ಹಸುವನ್ನು ಎತ್ತಲು ಪ್ರಯತ್ನಿಸಿದರು ಆದರೆ ಅದು ತಲೆಕೆಳಗಾಗಿ ಬಿದ್ದಿದ್ದು ಎತ್ತಲು  ಸಾಧ್ಯವಾಗದಿದ್ದಾಗ  ಅಲ್ಲೇ ಪಕ್ಕದ ಮನೆಗೆ ತೆರಳಿ ಅವರಲ್ಲಿ ಮೊಬೈಲನ್ನು ಪಡೆದು  ತಮ್ಮ ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು ತಕ್ಷಣ ಆ ಜಾಗಕ್ಕೆ ಬಂದ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು  ಅಲ್ಲೇ ಇದ್ದ ಪಕ್ಕದ ಮನೆ ಒಂದರಲ್ಲಿ ಹಗ್ಗವನ್ನು ತರಿಸಿ ದೈಹಿಕ ಶಿಕ್ಷಕರಾದ  ನಾಗರಾಜ್ ಚರಂಡಿ ಒಳಗೆ ಇಳಿದು ದನದ ಕುತ್ತಿಗೆಗೆ ಹಗ್ಗವನ್ನು ಹಾಕಿ ಇಬ್ಬರು ವಿದ್ಯಾರ್ಥಿಗಳಿಗೆ ಧನದ ಬಾಲವನ್ನು ಎತ್ತಲು ಹೇಳಿದರು  ಅದರಂತೆ ಮಾಡಿದ ವಿದ್ಯಾರ್ಥಿಗಳು ತಲೆಕೆಳಗಾಗಿ ಬಿದ್ದ ಹಸುವನ್ನು ನೇರ ಸ್ಥಿತಿಗೆ ತರುವಲ್ಲಿ ಸಫಲರಾದರು
ನಂತರ ಹೊಟ್ಟೆ ಭಾಗಕ್ಕೆ ಹಗ್ಗ ಹಾಕಿ ಮೇಲೆತ್ತಿ  ನೀರು ಬೆಲ್ಲ ನೀಡಿ ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿ ಗೋ ಮಾತೆಯ ಜೀವವನ್ನು ರಕ್ಷಣೆ ಮಾಡಿದರು.


*ಗೊತ್ತಾಗಿದ್ದು ಹೇಗೆ*
ನಿತ್ಯವೂ ಬಸ್ಸಿನಲ್ಲಿ ಓಡಾಡುವ ಈ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನದ ವಿಶೇಷ ತರಗತಿಗಳನ್ನು ಮುಗಿಸಿಕೊಂಡು ಮನೆಗೆ ನಡೆದು ಕೊಂಡು ಹೋಗುತ್ತಿರುವಾಗ  ಅಲ್ಲಿ ಪಕ್ಕದಲ್ಲಿದ್ದ ಚರಂಡಿಯಲ್ಲಿ ದನದ ಎರಡು ಕಾಲುಗಳನ್ನು ಗಮನಿಸಿದ ವಿದ್ಯಾರ್ಥಿಗಳು ಹತ್ತಿರ ಹೋಗಿ ನೋಡಿದಾಗ ಅಲ್ಲಿ ಗೋವು ಬಿದ್ದದನ್ನು  ಗಮನಿಸಿ ಸತ್ತುಹೋಗಿರ ಬಹುದೆಂದು  ಭಾವಿಸಿದರು  ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿದಾಗ ಹೊಟ್ಟೆಯ ಏರಿಳಿತವನ್ನು ಗಮನಿಸಿದ ವಿದ್ಯಾರ್ಥಿಗಳು ಇನ್ನು ಜೀವವಿದೆ  ಎಂದು ತಿಳಿದ ಇವರು  ಅದರ ರಕ್ಷಣೆಗೆ  ಮುಂದಾದರು...

HUMANITY.


Discover more from Prasarana news

Subscribe to get the latest posts sent to your email.

  • Related Posts

    HARATHALU HALAPPA:   ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ: ಹರತಾಳು ಹಾಲಪ್ಪ…

    ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು…

    Read more

    RIPPONPET NEWS: ಕಾಲಭೈರವೇಶ್ವರ ಮಹಿಳಾ ಸಂಘದಿಂದ ಶರ್ಮಿನ್ಯಾವತಿ ನದಿಗೆ ಬಾಗಿನ ಅರ್ಪಣೆ..

    ರಿಪ್ಪನ್ ಪೇಟೆ: ಈ ಬಾರಿ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾಲಭೈರವೇಶ್ವರ ಮಹಿಳಾ ಸಂಘದ ವತಿಯಿಂದ ಗವಟೂರಿನ ಶರ್ಮಿನ್ಯಾವತಿ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಈ ಬಗೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ಮಹಿಳಾ ಸಂಘದ ಸದಸ್ಯರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading