

ಹೊಸನಗರ: ಬದುಕಿ ಬಾಳಬೇಕಿದ್ದ ಮಗನ ಅಗಲಿಕೆಯ ನೋವು ಒಂದೆಡೆಯಾದರೆ ಇನ್ನೊಬ್ಬರ ಬಾಳಿಗೆ ಬೆಳಕನ್ನ ನೀಡುವ ಸಾರ್ಥಕತೆಯ ಮನಸ್ಸು ಇನ್ನೊಂದೆಡೆ ಹೌದು ಹೊಸನಗರ ತಾಲೂಕಿನ ಕೋಟೆತಾರಿಗ ಸಮೀಪ ಇಂತಹದೊಂದು ಸಾರ್ಥಕತೆಯ ಘಟನೆ ನಡೆದಿದೆ.
ಕೋಟೆತಾರಿಗದ ಮೋಹನ್ ಹಾಗೂ ಸುನಿತಾ ದಂಪತಿಗಳ ಮಗನಾದ ಶಮಿತ್ (18) ಇವರು ಬಹುಕಾಲದ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಬಹಳಷ್ಟು ಕಡೆ ಚಿಕಿತ್ಸೆಯನ್ನ ಪಡೆದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ .
ಇಂದು ಮುಂಜಾನೆ ಅವರು ನಿಧನರಾಗಿದ್ದು ಅವರ ಪೋಷಕರಾದ ಮೋಹನ್ ಹಾಗೂ ಸುನಿತ ದಂಪತಿಗಳು ಮಗನ ಸಾವಿನನ್ನು ಸಾರ್ಥಕತೆಯನ್ನು ಮೆರೆದಿದ್ದಾರೆ ನಿಧನ ಹೊಂದಿದೆ ಮಗನ ಕಣ್ಣುಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದು ಇವರ ಈ ನಿರ್ಧಾರ ಒಂದಿಷ್ಟು ಜನರಿಗೆ ಪ್ರೇರಣೆಯಾಗಿದೆ..
EYE DONATION..
Discover more from Prasarana news
Subscribe to get the latest posts sent to your email.