

ಹೊಸನಗರ:ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ, ತಾಲೂಕು ಆರ್ಯ ಈಡಿಗ ಸಂಘದ ಕಾರ್ಯ ದರ್ಶಿಗಳು, ಮುಂಬಾರ್ ಸೊಸೈಟಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಲೇಖನ ಮೂರ್ತಿ ಅವರಿಗೆ ಇಂದು ಗಾಂಧಿ ಮಂದಿರದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶ್ರದ್ಧಾಂಜಲಿಯನ್ನ ಅರ್ಪಿಸಲಾಯಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊಸನಗರ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ರಾಜಕೀಯ ಹಾಗೂ ಸಹಕಾರ ಕ್ಷೇತ್ರಕ್ಕೆ ಲೇಖನ ಮೂರ್ತಿಯವರ ಕೊಡುಗೆ ಅಪಾರವಾದದ್ದು ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ ಅವರ ಅಗಲಿಕೆ ನೋವನ್ನು ಅರಗಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಸಂದರ್ಭದಲ್ಲಿ ತಿಳಿಸಿದರು. ಈ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಮುಖಂಡರಾದ ಬಿ ಆರ್ ಪ್ರಭಾಕರ್, ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಮುಖಂಡರಾದಏರಿಗೆ ಉಮೇಶ್, ಬಿ ಜಿ ನಾಗರಾಜ್, ಲೋಕೇಶಪ್ಪ , ವಕೀಲರು ಷಣ್ಮುಖಪ್ಪ ಪಟ್ಟಣ ಪಂಚಾಯತ್ ಸದಸ್ಯರಾದ ಗುರುರಾಜ್, ಅಶ್ವಿನ್ ಕುಮಾರ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಮುಖಂಡರಾದ ವೆಂಕಟೇಶ್, ಎಂಪಿ ಸುರೇಶ್ , ಉಬೇದ, ಗುರು ಜಯನಗರ ಇನ್ನು ಮುಂತಾದವರು ಉಪಸ್ಥಿತರಿದ್ದರು..
TRIBUTE
Discover more from Prasarana news
Subscribe to get the latest posts sent to your email.