

ಹೊಸನಗರ; ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ವೆಲ್ಗೆ ನಿರಂತರ ವಿದ್ಯುತ್ ಒದಗಿಸವಂತೆ ಆಗ್ರಹಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ ನೇತೃತ್ವದಲ್ಲಿ ಸಾರ್ವಜನಿಕರೊಳಗೊಂಡ ನಿಯೋಗವು ಶಿವಮೊಗ್ಗ ವಿಭಾಗದ ಮೆಸ್ಕಾಂನ ಸೂಪರಿಂಟೆAಡೆAಟ್ ಇಂಜಿನೀಯರ್ ಜಯದೇವಪ್ಪ ಅವರನ್ನು ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಭೇಟಿ ಮನವಿ ಮಾಡಿತು.
ಕಳೆದ ಕೆಲವು ವರ್ಷಗಳ ಹಿಂದೆ ಜಾಕ್ವೆಲ್ಗೆ ಅಳವಡಿಸಿ ಎಬಿ ಕೇಬಲ್ ಶಿಥಿಲಾವಸ್ಥೆಯಲ್ಲಿದೆ. ಪಂಚಾಯ್ತಿ ಸರಬರಾಜು ಮಾಡಿದ ಕೇಬಲ್ ಅನ್ನು ಮೆಸ್ಕಾಂ ಅಳವಡಿಸಿತ್ತು. ಬಹಳ ಕಳಪೆ ಗುಣಮಟ್ಟದ ಕೇಬಲ್ ಅಳವಡಿಸಿದ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದ್ದು, ಇದೇ ಜನವರಿ ೩೦ರಂದು ತಾಲೂಕಿನ ಎಲ್ಲಾ ವಿದ್ಯುತ್ ಫೀಡರ್ಗಳ ಸಂಪರ್ಕ ತಪ್ಪಿಸಿ, ಕೇಂದ್ರ ಸ್ಥಾನದಲ್ಲಿ ದುರಸ್ತಿಗೆ ಮುಂದಾಗುವAತೆ ಎಇಇ ಚಂದ್ರಶೇಖರ್, ವಿಭಾಗೀಯ ಅಧಿಕಾರಿ ಮಾಯಣ್ಣಗೌಡ ಅವರಿಗೆ ಸೂಚನೆ ನೀಡಿದರು.
ಕಳೆದ ಕೆಲವು ದಿನಗಳಿಂದ ಸಾಗರದ ಮೆಸ್ಕಾಂ ವಿಭಾಗದ ಅವಘಡದಿಂದಾಗಿ ಪಟ್ಟಣದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ೨/೩ ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಶ್ರೀಘ್ರದಲ್ಲೇ ಮಾರಿಜಾತ್ರೆ ಹಾಗು ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಎಬಿ ಕೇಬಲ್ ಬದಲಾವಣೆ ಕಾರ್ಯ ಶೀಘ್ರ ಮುಗಿಸಿ ಎಂದು ನಾಗರೀಕರು ಅಹವಾಲು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಚಂದ್ರಕಲಾ ಸದಸ್ಯರಾದ ಅಶ್ವಿನಿಕುಮಾರ್, ಸಿಂಥಿಯಾ, ಆರ್. ಗುರುರಾಜ್, ಶಾಹಿನ, ನೇತ್ರಾಭಟ್, ನಿತ್ಯಾನಂದ್, ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ವಾಟರ್ಮ್ಯಾನ್ ಬಸವರಾಜ್, ನಾಸೀರ್, ವಸಂತ ಸರಿದಂತೆ ಹಲವರು ಉಪಸ್ಥಿತರಿದ್ದರು..
MESCOM..
Discover more from Prasarana news
Subscribe to get the latest posts sent to your email.