YESU PRAKASH:ಸಾರ ಸಂಸ್ಥೆ ದೊಂಬೆಕೊಪ್ಪದಲ್ಲಿ ಯೇಸು ಪ್ರಕಾಶ್ ನೆನಪಿನ ನಾಟಕೋತ್ಸವ…

ಹೊಸನಗರ:ಕಲೆಯೊಂದಿಗೆ ಸಾಮಾಜಿಕ  ಕಳಕಳಿಯ ಹೊಂದಿದ್ದ ಕಲಾವಿದ. ಭಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ರಕ್ಷಣೆ ಸಂಬಂಧಿ ತಮ್ಮನ್ನು ತೊಡಗಿಸಿಕೊಂಡವರು. ಕೆರೆಗಳ ಪುನಶ್ಚೇತನ ಕಾಮಗಾರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದ ಸಾಮಾಜಿಕ ಕಳಕಳಿಯ ನಟ ಯೇಸು ಪ್ರಕಾಶ್ ಅವರ ನೆನಪಿನ ಬುತ್ತಿಗಾಗಿ ನಾಳೆ ಇಂದ ದೊಂಬೆಕೊಪ್ಪದ ಸಾರ ಸಂಸ್ಥೆ  ಯೇಸು ಪ್ರಕಾಶ್ ನೆನಪಿನ ನಾಟಕೋತ್ಸವ ಮತ್ತು ಬೇಸಿಗೆ ಶಿಬಿರವನ್ನು ಸಾರ ಕೇಂದ್ರ ಮತ್ತು ಕೆ ವಿ ಸುಬ್ಬಣ್ಣ ರಂಗಸಮುಹ ಹೆಗ್ಗೋಡು ಆಯೋಜಿಸಿದೆ.
ದಿನಾಂಕ 10- 4- 2025 ಸಂಜೆ 6:00ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಭೂಮಿ ಹಾಗೂ ಚಿತ್ರನಟರು ನಿರ್ದೇಶಕರು ಆದಂತಹ ಶ್ರೀ ಪ್ರಕಾಶ್ ಬೆಳವಾಡಿ ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ರಂಗಕರ್ಮಿ ಟಿ ನಾರಾಯಣ ಭಟ್ ಅವರನ್ನ ಸನ್ಮಾನಿಸಲಿದ್ದಾರೆ ಸಂಜೆ 7:00ಗೆ ಕಲಾಚಕ್ರ ನಾಟಕ ಪ್ರದರ್ಶನವಿದ್ದು ದಿನಾಂಕ 11- 4 -2025 ರ ಭಾನುವಾರ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರ ಬೆಳಿಗ್ಗೆ 9:00 ರಿಂದ ಸಂಜೆ 5:00 ವರೆಗೆ ನಡೆಯಲಿದೆ ಅದೇ ದಿನ ಸಂಜೆ 7:00ಗೆ ಧರ್ಮನಟಿ ನಾಟಕ ಮರುದಿನ ಸಂಜೆ 7 ಗಂಟೆಗೆ ನಾಯಿ ಕಳೆದಿದೆ ನಾಟಕ ಪ್ರದರ್ಶನವು ಸಹ ಇರಲಿದೆ ಈ ವಿಶೇಷ ಕಾರ್ಯಕ್ರಮದಲ್ಲಿ ಸರ್ವರನ್ನು ಸಾರಾ ಸಂಸ್ಥೆಯ ಅಧ್ಯಕ್ಷರಾದ ಗುರುಪಾದಪ್ಪ ಗೌಡ ಆಹ್ವಾನಿಸಿದ್ದಾರೆ.

YESU PRAKASH...


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading