PAURAKARMIKA: ಕ್ರೀಡಾಕೂಟ ಸಂಬಂಧಗಳ ಬೆಸುಗೆಗೆ‌ ಸಹಕಾರಿ: ಶಾಸಕ ಬೇಳೂರು…



ಹೊಸನಗರ: ಸಂಬಂಧಗಳ ಪರಸ್ಪರ ವೃದ್ದಿಗೆ ಕ್ರೀಡಾಕೂಟಗಳ ಆಯೋಜನೆ ಸಹಕಾರಿ ಆಗಲಿದೆ‌ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ತುಳಿತಕ್ಕೆ ಒಳಗಾದ ಈ ಸಮಾಜವು ಇಂದು ಸಮಾಜದ ಎಲ್ಲಾ ಸ್ತರಗಳಲ್ಲಿ ಸಮಾನತೆ ಸಾಧಿಸಲು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕಾರಣ. ಕೇವಲ ಪಟ್ಟಣದ ಸ್ವಚ್ಛತೆಗೆ ಮೀಸಲು ಎಂಬ ಹಣೆ ಪಟ್ಟಿ ತೊಡೆದು ಹಾಕಿ ಶೈಕ್ಷಣಿಕ, ಆರ್ಥಿಕ ವಾಗಿ ಮುಂಚೂಣಿಗೆ ಬಂದಿರುವ ಸಂಗತಿ ಇತರರಿಗೆ ಪ್ರೇರಣೆ ಆಗಿದೆ. ಸದಾ ಸಮಾಜದ ಏಳಿಗೆಗೆ‌ ಶ್ರಮಿಸುತ್ತಿರುವ ಈ‌ ಶೋಷಿತ ವರ್ಗದ ಅಭಿವೃದ್ಧಿಯ ಮನವಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಶಂಕರನಾರಾಯಣ ತಂಡ ಪ್ರಥಮ ಸ್ಥಾನಗಳಿಸಿದರೆ, ಸ್ಥಳೀಯ ತಂಡ ರನ್ನರ್ ಅಪ್‌ಸ್ಥಾನಕ್ಕೆ ಪಾತ್ರವಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ದೇವಾನಂದ್, ಶ್ರೀಪತಿ ರಾಯ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ‌ ಮಾಸ್ತಿಕಟ್ಟೆ ಸುಬ್ರಹ್ಮಣ್ಯ,  ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಸದಸ್ಯರಾದ ಗುರುರಾಜ್ ಆರ್, ಸಿಂಥಿಯಾ ಶೆರಾವ್, ಶಾಹಿನ‌,  ಹೊಸನಗರ ಬ್ರದರ್ಸ್ ಕ್ರಿಕೆಟರ್ಸ್ ಗೌರವಾಧ್ಯಕ್ಷ ನಾಗಪ್ಪ, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ‌ಅಧ್ಯಕ್ಷ ಎನ್.ಜಿ.ಪ್ರವೀಣ್, ಹಿಟಾಚಿ ಶ್ರೀಧರ್, ನಾಸೀರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ನೋಟ್ ವಿತರಣೆ,ಸಾಧಕರಿಗೆ ಸನ್ಮಾನ ನೆರವೇರಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್ ಸ್ವಾಗತಿಸಿ-ನಿರೂಪಿಸಿದರು..

PAURAKARMIKA


Discover more from Prasarana news

Subscribe to get the latest posts sent to your email.

  • Related Posts

    NETBALL:ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ನೆಟ್ ಬಾಲ್ ಪಂದ್ಯಾವಳಿಗೆ “ಎಂ.ಗಣೇಶ್ ಆಯ್ಕೆ”

    ಹೊಸನಗರ: ಮಂಗಳೂರು ವಿಶ್ವವಿದ್ಯಾನಿಲಯದ ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿ ಎಂ. ಗಣೇಶ್ ಮುಂಬರುವ ಜನವರಿ 2ರಿಂದ 6ರ ವರಗೆ ರಾಜಸ್ಥಾನದ ಜೈಪುರದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್ ಬಾಲ್ ಚಾಂಪಿಯನ್ಷಿಪ್…

    Read more

    HOSANAGARA-SPORTS ಗುಡ್ಡಗಾಡು ಓಟ ಮಹಿಳಾ ಹಾಗೂ ಪುರುಷ ವಿಭಾಗದಲ್ಲಿ ಶಿವಮೊಗ್ಗ ಡಿ,ವಿಎ,ಸ್ ಕಾಲೇಜ್ ಪ್ರಥಮ.

    ಹೊಸನಗರ: ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ಹಾಗೂ ನ್ಯಾಕ್ ಮತ್ತು ಐಕ್ಯು ಎಸಿ ಸಹಯೋಗದೊಂದಿಗೆ ಮಂಗಳವಾರ ನಡೆದಂತಹ ಕುವೆಂಪು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗೂ ಮಹಿಳಾ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಶಿವಮೊಗ್ಗ ಡಿ ವಿ ಎಸ್ ಕಾಲೇಜು…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading