KUWJ 2024-25: ಲೇಖನಿಗೆ ಸಂದ ಗೌರವ : ಪತ್ರಕರ್ತ ನಾ.ರವಿ….
ಮಂಡಿಬೆಲೆ ಶ್ಯಾಮಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವಿ ಬಿದನೂರಿಗೆ ಸ್ಥಳೀಯ ಪತ್ರಕರ್ತರ ಅಭಿನಂದನೆ..

ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) KUWJ - 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿ ಸ್ವೀಕರಿಸಿದ ತಾಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾ.ರವಿ ನೇತೃತ್ವದಲ್ಲಿ ಹಲವು ಪತ್ರಕರ್ತರು ಪ್ರಶಸ್ತಿ ಪುರಸ್ಕೃತರ ಸ್ವ ಗೃಹಕ್ಕೆ ತೆರಳಿ ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಿದರು.
ತಮ್ಮ ಲೇಖನಿಯ ಮೂಲಕ ಗ್ರಾಮೀಣ ಭಾಗದ ಹಲವು ಜನಪರ ಜ್ವಲಂತ ಸಮಸ್ಯೆಗಳ ಸೂಕ್ತ ಪರಿಹಾರಕ್ಕಾಗಿ ತಮ್ಮ ವಿಶಿಷ್ಟ ಲೇಖನದ ಮೂಲಕ ಸರಕಾರದ ಗಮನ ಸೆಳೆದ ಕಾರಣಕ್ಕೆ ಈ ಬಾರಿಯ ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿಗೆ ರವಿ ಬಿದನೂರು ಭಾಜನರಾಗಿದ್ದರು.
ಇದೇ ಜನವರಿ 18-19ರಂದು ತುಮಕೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸಂಘ ಗೌರವಿಸಿತ್ತು.
ಈ ವೇಳೆ ಪತ್ರಕರ್ತ ನಾ.ರವಿ ಮಾತನಾಡಿ, ಸುಮಾರು 25 ವಸಂತಗಳ ನಿರಂತರ ಪತ್ರಿಕೋದ್ಯಮದಲ್ಲಿ ರವಿ ಬಿದನೂರು ನೀಡಿದ ಸೇವೆ ಅಪಾರ. ಹಲವು ಯುವ ಪತ್ರಕರ್ತರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುವ ಜೊತೆಯಲ್ಲಿ ಪತ್ರಿಕೋದ್ಯಮ ತಿರುಳನ್ನು ಧಾರೆ ಎರೆದ  ಅವರ ಗುಣ ಈ ಸಾಧನೆಗೆ ಪ್ರೇರಣೆ  ಎಂದರು.
ಈಗಾಗಲೇ ಹಲವು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಮತ್ತಷ್ಟು ಪ್ರಶಸ್ತಿಗಳ ಸರಮಾಲೆಯೇ ಒಲಿದು ಬರಲೆಂದು ಪತ್ರಕರ್ತೆ ಅಶ್ವಿನಿ ಪ್ರಭು ಶುಭ ಹಾರೈಸಿದರು.
ಮನು ಸುರೇಶ್, ಶ್ರೀಕಂಠ ಇದ್ದರು...

KUWJ 2024-25...


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading