TERRORIST ATTACK: ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ..
ಹಿಂದೂ ಸಂಘಟನೆಗಳಿಂದ ಪ್ರತಿಭಟನೆ..

ಹೊಸನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಮ್ನ್ ನ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಅಡಿಯನ್ನ ಹೊಸನಗರ ತಾಲೂಕಿನ ವಿವಿಧ ಹಿಂದುಪರ ಸಂಘಟನೆ ಗಳು ತೀವ್ರವಾಗಿ ಖಂಡಿಸಿದ್ದಲ್ಲದೆ ಭಯೋತ್ಪಾದಕ ಸಂಘಟನೆಗಳನ್ನು ಮೂಲದಿಂದ ನಿರ್ನಾಮ ಮಾಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಗು ಮುನ್ನ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ದೇವಾನಂದ್ ವಿಶ್ವಕ್ಕೆ  ಶಾಂತಿಯ ಸಂದೇಶವನ್ನು ನೀಡುತ್ತಿರುವಂತಹ ಭಾರತಕ್ಕೆ ಭಯೋತ್ಪಾದಕರು ಆಘಾತವನ್ನು ನೀಡಿದ್ದಾರೆ ಈ ಕೃತ್ಯವನ್ನ ನಮ್ಮ ಸೈನಿಕರು ಸವಾಲಾಗಿ ಸ್ವೀಕರಿಸಿ ಈ ಕೃತ್ಯಕ್ಕೆ ದಿಟ್ಟ ಉತ್ತರವನ್ನು ನೀಡಬೇಕು ಈ ಭಯೋತ್ಪಾದಕರ ನಿರ್ಣಾಮಕ್ಕೆ ಸೈನಿಕರಿಗೆ ಸರ್ಕಾರ ಸಂಪೂರ್ಣವಾದ ಅಧಿಕಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಈ ಒಂದು ಕೃತ್ಯವನ್ನು ದೇಶದ ಮುಸ್ಲಿಂ ಸಂಘಟನೆಗಳಾಗಲಿ ಮುಖಂಡರಾಗಲಿ ವಿರೋಧಿಸದೇ ಇರುವುದು ಖಂಡನಿಯ ಈ ದೇಶದ ಪರವಾಗಿ ಮುಸಲ್ಮಾನರು ಇರುವುದು ನಿಜವಾಗಿದ್ದರೆ ಮೊದಲು ಅವರು ಈ ಕೃತಿಯನ್ನು ವಿರೋಧಿಸಬೇಕಿತ್ತು ಎಂದರು.
ಬಳಿಕ ಉಪ ತಹಸಿಲ್ದಾರ್ ರಾಕೇಶ್ ಅವರಿಗೆ ಮನವಿಯನ್ನು ಸಲ್ಲಿಸಿದರು ಈ ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಸುಬ್ರಹ್ಮಣ್ಯ ಮತ್ತಿ ಮನೆ, ಬಿಜೆಪಿ ಜಿಲ್ಲಾ
ಒಬಿಸಿ ಮೋರ್ಚ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಮುಖಂಡರಾದ ಗಣಪತಿ ಬೆಳಗೋಡು, ಸುಧೀಂದ್ರ ಪಂಡಿತ್, ರಮೇಶ್, ಮೋಹನ್ ಮಂಡನಿ, ಅಭಿಲಾಶ್ ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು...

TERRORIST ATTACK:.


Discover more from Prasarana news

Subscribe to get the latest posts sent to your email.

  • Related Posts

    SAGARA NEWS:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ, ಕಳಸವಳ್ಳಿ-ಅಂಬರಗೊಂಡ್ಲು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ: ಹರತಾಳು ಹಾಲಪ್ಪ..

    ಹೊಸನಗರ: ಕಳಸವಳ್ಳಿ-ಅಂಬರಗೊಂಡ್ಲು  ಸೇತುವೆ ಉದ್ಘಾಟನಾ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ನಾಡಿಗೆ ಬೆಳಕು ನೀಡಿ ಸರ್ವಸ್ವವನ್ನು ಕಳೆದುಕೊಂಡ ಈ ಭಾಗದ ಸಂತ್ರಸ್ತರ ಆರು ದಶಕಗಳ ಕನಸು ನನಸಾಗುವ ಸಂದರ್ಭ ಸಮೀಪಿಸುತ್ತಿದ್ದು ಜುಲೈ 14 ರ ದಿನ ಆ ದಿನಕ್ಕೆ ಸಾಕ್ಷಿಯಾಗಲಿದೆ ಎಂದು…

    Read more

    HOSANAGARA NEWS:    ಅಗತ್ಯ ವೈದ್ಯರ ನೇಮಕಕ್ಕಾಗಿ ಮುಂದುವರೆದ ಪ್ರತಿಭಟನೆ…
    ಪ್ರತಿಭಟನಾ ಸ್ಥಳಕ್ಕೆ ಬಾರದ ಅಧಿಕಾರಿಗಳು…

    ಹೊಸನಗರ: ರಾಜ್ಯದಲ್ಲೇ  ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲೂಕಿನ ನಗರ ಹೋಬಳಿಯ ಮೂಡುಗೊಪ್ಪ ಗ್ರಾಮದ  ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಅಗತ್ಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವಂತೆ ನಿನ್ನೆ ರಾತ್ರಿಯಿಂದಲೇ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಇಂದು ಸಹ ವೈದ್ಯರನ್ನು…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading