HOSANAGARA NEWS:        ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಪಿ.ಡಿ.ಓ ಎಸ್. ರವಿ ಅಮಾನತ್ತು..

ಹೊಸನಗರ: ತಾಲೂಕಿನ ಎಂ. ಗುಡ್ಡಕೊಪ್ಪ ಗ್ರಾಮ ತಾಲೂಕು ಪಂಚಾಯತಿಗೆ ನಿಯೋಜನೆಗೊಂಡಿದ್ದ ಎಸ್. ರವಿ ಅವರನ್ನು ಸರ್ಕಾರಿ ಸೇವೆಯಲ್ಲಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಓ ಮತ್ತು ತಿಸ್ತು ಪ್ರಾಧಿಕಾರದ ಅಧಿಕಾರಿ ಎನ್. ಹೇಮಂತ್ ಅವರು ಇಲಾಖೆ ವಿಚಾರಣೆ ಕಾಯ್ದಿರಿಸಿ, ಪಿಡಿಒ ಎಸ್. ರವಿ ಅವರನ್ನು ತತಕ್ಷಣ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ 21 ಜಲೈ 2025ರಂದು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಎಂ. ಗುಡೇಕೊಪ್ಪ ಗ್ರಾಮ ಪಂಚಾಯತಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಪಂಚಾಯತಿ ವ್ಯಾಪ್ತಿಯ ಇ-ಸ್ವತ್ತಿಗೆ ಸಂಬಂಧಿಸಿದಂತೆ, ಇ-ಸ್ವತ್ತಿನ ದಾಖಲೆಗಳನ್ನು ನಿರ್ವಹಿಸಲು ಇಲಾಖಾ ನಿಯಮಾನುಸಾರ ಪ್ರತ್ಯೇಕ ರಿಜಿಸ್ಟರನ್ನು ನಿರ್ವಹಿಸಿರುವುದಿಲ್ಲ.ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ನೋಂದಣಿಯಾಗಿದ್ದ65 ಇ-ಸ್ವತ್ತುಗಳು ಪಿಡಿಒ ಲಾಗಿನ್ನಲ್ಲಿ ಬಂದಿದ್ದು, ಇವುಗಳನ್ನು ಯಾವುದೇ ಕಾರಣವಿಲ್ಲದೆ ಪಿಡಿಒ ತಿರಸ್ಕರಿಸಿದ್ದಾರೆ. ತಿರಸ್ಕೃತ ಇ-ಸ್ತೋತ್ತುಗಳು ಮತ್ತೆ ನೀಡಲು ಸಬ್ ರಿಜಿಸ್ಟ್ರಾರ್ ಅವರಿಗೆ ಅವಕಾಶ ಇರುವುದಿಲ್ಲ. ಇದು ಪುನಹ ರಾಜ್ಯ ಸರ್ಕಾರಕ್ಕೆ ಪತ್ರ ಮುಖೇನ: ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಮತ್ತೊಮ್ಮೆ ಇ-ಸ್ವತ್ತಿಗೆ ತಂತ್ರಾಂಶ ಮುಖಾಂತರ ಕಳುಹಿಸ ಬೇಕಾಗಿದ್ದು, ಇದು ಸಾರ್ವಜನಕರಿಗೆ ವಿನ ಕಾರಣ ನೀಡಿದ ತೊಂದರೆ ಆಗಿದೆ.ಪಂಚಾಯತಿ ವ್ಯಾಪ್ತಿಯ ಲೇಔಟ್ ಅಸ್ತಿಗಳು ಹಾಗೂ ಇತರೆ ಆಸ್ತಿಗೆ ಸಂಬಂಧಿಸಿದಂತೆ ಒಟ್ಟು 414 ಸ್ವತ್ತುಗಳಿಗೆ ಪಂಚತಂತ್ರಾಂಶದಲ್ಲಿ ತೆರಿಗೆ ಮಾಹಿತಿ ಇಂಡೀಕರಿಸಿದನಂತರ ತೆರಿಗೆಯ ಮಾಹಿತಿಯನ್ನು ತಿದ್ದುಪಡಿ ಮಾಡಿ ಶೂನ್ಯ ಎಂದು ನಮೂದು ಮಾಡಿದ್ದು, ಇದರಿಂದ ತಂತ್ರಾಂಶದಲ್ಲಿ ಶೂನ್ಯ ಬೇಡಿಕೆ ಸೃಜನೆಯಾಗಿದೆ. ಇದರಿಂದ ಪಂಚಾಯತಿ ವ್ಯಾಪ್ತಿಯ ಒಟ್ಟು 414 ಸ್ವತ್ತುಗಳಿಗೆ ಯಾವುದೇ ಕಂದಾಯ ನಿಗದಿ ಪಡಿಸಲಾಗದೆ, ಪಂಚಾಯತಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಲ್ಲದೆ, ಪಿಡಿಒ ಎಸ್. ರವಿ ಕೇಂದ್ರ ಸ್ಥಾನದಲ್ಲಿ ವಾಸವಿರದೆ, ಕಚೇರಿಯ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗದೆ ಸಾರ್ವಜನಕರಿಗೆ ತೊಂದರೆ ನೀಡಿದ್ದು, ಶವ ಸಂಸ್ಕಾರದಲ್ಲಿ ಸಾಮಾನ್ಯ ವರ್ಗದವರಿಗೂ ಸಾವಿರಾರು ರೂಪಾಯಿ ಅನುದಾನ ನೀಡಿದ್ದಾರೆ. ನಿರ್ದಿಷ್ಟ ಯೋಜನೆಗಳಿಗೆ ಸಹಾಯಧನ ನೀಡುವ ವೇಳೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವುದಿಲ್ಲ. 15ನೇ ಹಣಕಾಸು ಯೋಜನೆಯಡಿ 3ಲಕ್ಷ 39 ಸಾವಿರ 342 ರೂಪಾಯಿಗಳನ್ನು ಮೆಸ್ಕಾಂ ವಿದ್ಯುತ್ ಸಂಪರ್ಕ ಪಡೆಯಲು ವ್ಯಯಿಸಿದ್ದು, ಸದರಿ ಕಾಮಗಾರಿಗಳೇ ನಡೆಯದೆ, ಹಣ ವ್ಯಯವಾಗಿದ್ದು, ಜಿಲ್ಲುಗಳಲ್ಲಿ ಸಹ ಭಾರೀ ವೃತ್ತಾಸ ಕಂಡುಬಂದಿದೆ. ಈ ಬಗ್ಗೆ ಯಾವುದೇ ಸಭೆಯಲ್ಲೂ ಅನುಮೋದನೆ ಪಡೆದಿಲ್ಲ.ಈ ಕುರಿತು ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು ಹಲವು ಲಿಖಿತ ದೂರು ನೀಡಿದ್ದು, ಎಸಗಿದ್ದ ಕರ್ತವ್ಯಲೋಪವನ್ನು ಕುರಿತು ಕಾರಣಕೇಳಿ ಪಿಡಿಒ ಎಸ್. ರವಿ ಅವರಿಗೆ ಇಲಾಖೆ ನೋಟೀಸ್ ನೀಡಿದ್ದರೂ, ಸಮಜಾಯಿಷಿ ಉತ್ತರ ನೀಡಲು ನೀಡಿದ್ದ ಕಾಲಾವಕಾಶ ಕೊನೆ ಗೊಂಡ ಹಿನ್ನಲೆಯಲ್ಲಿ ಈ ಮೇಲಿನ ಎಲ್ಲಾ ಆರೋಪಗಳನ್ನು ಪರಿಶೀಲನೆ ಮಾಡಿ ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿಗಳು ನೀಡಿದ್ದ ವರದಿ ಹಿನ್ನಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಡಿಒ ಎಸ್.ರವಿ ಅವರನ್ನು ತತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

HOSANAGARA NEWS..


Discover more from Prasarana news

Subscribe to get the latest posts sent to your email.

  • Related Posts

    SARA:HOSANAGARA:ಉಚಿತ ಆರೋಗ್ಯ ತಪಾಸಣಾ ಶಿಬಿರ: ದೈಹಿಕ ಚಟುವಟಿಕೆ ರೂಢಿಸಿಕೊಳ್ಳಲು ಸಲಹೆ..

    ಹೊಸನಗರ:ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ ರಾಕೇಶ್  ಗ್ರಾಮಸ್ಥರಿಗೆ ಸಲಹೆಯನ್ನ ನೀಡಿದರು. ಬಟ್ಟೆ ಮಲ್ಲಪ್ಪದ ಸಾರ ಸಂಸ್ಥೆಯಲ್ಲಿ  ಮನ್ವಿತಾ ಹೆಲ್ತ್ ಕೇರ್ ಚೆನ್ನೈ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ ಇವರ…

    Read more

    HOSANAGARA NEWS:      ಭಾರಿ ಮಳೆ; ನೆಲಕ್ಕುರುಳಿದ ಮರಗಳು, 118ಕ್ಕೂ ಅಧಿಕ  ವಿದ್ಯುತ್‌ ಕಂಬಗಳಿಗೆ  ಹನಿ…..

    ಹೊಸನಗರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ ವಿದ್ಯುತ್ ಸಂಪರ್ಕ,ಮನೆಗಳಿಗೆ ಹಾನಿ, ಮೊಬೈಲ್ ನೆಟ್ವರ್ಕ್, ವಾಹನ ಸಂಚಾರ, ವ್ಯವಹಾರ ದಲ್ಲಿ ವ್ಯಥೆಯ ಸೇರಿ ಬಹಳಷ್ಟು ಸಮಸ್ಸೆ ಉಂಟಾಗಿದೆ.ತಾಲೂಕಿಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ 118 ವಿದ್ಯುತ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading