COW PROTECTION:ಎರಡು ದಿನಗಳ ಹಿಂದೆ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಗೋವು ರಕ್ಷಣೆ…

ಹೊಸನಗರ: ಕಳೆದೆರಡು ದಿನಗಳ ಹಿಂದೆ ಐಬಿ ರಸ್ತೆಯಲ್ಲಿರುವ ಸಮರ್ಥ ಸೌಧದ ಹಿಂಭಾಗ ಇರುವ 10 ಅಡಿ ಅಳವಿರುವ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಗೋವನ್ನ ಸ್ಥಳೀಯ ಯುವಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಗಳು ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ಸ್ಥಳೀಯ ಯುವಕರಿಗೆ ಸಮರ್ಥಸೌಧದ ಹಿಂಭಾಗ ಗೋವು ಕೂಗುತ್ತಿರುವ ಶಬ್ದ ಕೇಳುತ್ತಿದೆ ಎಂದು ಅಲ್ಲಿನ ಅಡಿಕೆ ದಾಸ್ತಾನು ಕೊಠಡಿಯ    ಕಾವಲುಗಾರ ಒಬ್ಬರು ತಿಳಿಸಿದ್ದು ಕೂಡಲೇ ಯುವಕರು ಅಲ್ಲಿಗೆ ತೆರಳಿ ಗೋವನ್ನ ಹುಡುಕಲು ಪ್ರಾರಂಭಿಸಿದ್ದಾರೆ ಅಲ್ಲೇ ಸಮೀಪ ಇದ್ದ ನೀರಿನ ಟ್ಯಾಂಕ್ ನಲ್ಲಿ ಗೋವು ಬಿದ್ದಿರುವ ಬಗ್ಗೆ ತಿಳಿದು ಕೂಡಲೇ ಅಗ್ನಿಶಾಮಕ ದಳ ಠಾಣೆಗೆ ಮಾಹಿತಿಯನ್ನು ನೀಡಿ ಅವರು ಬಂದು ಬಳಿಕ ಅವರೊಡನೆ ಸೇರಿ ಸತತ ಎರಡು ಗಂಟೆಗಳ ಕಾಲ ಕಾರ್ಯಚರಣೆಯನ್ನು ನಡೆಸಿ ಗೋವನ್ನ ರಕ್ಷಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿಗಳಾದ ರವಿ ಜಿ, ಸುರೇಶ್ ಗೌಡ, ಆಂಜನೇಯ, ರವೀಂದ್ರ,ಕೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಸುರೇಂದ್ರ ಕೋಟ್ಯಾನ್, ರಾಘವೇಂದ್ರ, ಸಂತೋಷ್, ಅಣ್ಣಪ್ಪ, ಗುರುಪ್ರಸಾದ್, ಶರತ್, ಕಿರಣ್ ಪಾಲ್ಗೊಂಡಿದ್ದರು.

COW PROTECTION...


Discover more from Prasarana news

Subscribe to get the latest posts sent to your email.

  • Related Posts

    HOSANAGARA NEWS: ನಟಿ ಸರೋಜಾ ದೇವಿ ನಿಧನ:  ಚುಂಚಾದ್ರಿ ಮಹಿಳಾ ಸಂಘದಿಂದ ಸಂತಾಪ..

    ಹೊಸನಗರ:ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿಧು. ಅವರ ನಿಧನಕ್ಕೆ   ಚುಂಚಾದ್ರಿ ಮಹಿಳಾ ಸಂಘ ಸಂತಾಪ ಸೂಚಿಸಿದೆ.ಹಿರಿಯ ನಟಿಯ ಅಗಲಿಕೆಗೆ ಶ್ರದ್ದಾಂಜಲಿ ಸಭೆ ನಡೆಸಿ ಮಾತನಾಡಿದ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ. ಆರೂವರೆ ದಶಕಗಳು ಚಿತ್ರರಂಗದಲ್ಲಿ‌…

    Read more

    RIPPONPET NEWS:         ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ  ಅಧ್ಯಕ್ಷರಾಗಿ ಸುಧೀರ್ ಪಿ ಆಯ್ಕೆ…

    ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತಿಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ  58ನೇ ಗಣೇಶೋತ್ಸವದ ಅಧ್ಯಕ್ಷರಾಗಿ ಸುಧೀರ್ ಪಿ ಹಾಗೂ ಕಾರ್ಯದರ್ಶಿಯಾಗಿ ಮುರುಳಿ ಕೆರೆಹಳ್ಳಿ ಆಯ್ಕೆಯಾಗಿದ್ದಾರೆ. ಪಟ್ಟಣದ ಹಿಂದೂ ರಾಷ್ಟ್ರಸೇನಾದ ಸಭಾಂಗಣದಲ್ಲಿ ನಡೆದ ಗಣೇಶ್ೋತ್ಸವ  ಸಮಿತಿಯ ಸಭೆಯಲ್ಲಿ 2024 ರ ಹಿಂದೂ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading