

ಹೊಸನಗರ: ಎಂ.ಗುಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರವೀಣ.ಜಿ.ಎನ್ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಗ್ರಾಮ, ವ್ಯಾಪ್ತಿಯಲ್ಲಿ ರಸ್ತೆ ಒಳಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ನರೇಗಾ, ಜಲಜೀವನ್ ಮಿಷನ್ ಗಳಂತಹ ಹಲವಾರು ಯೋಜನೆಗಳನ್ನು ಜನತೆಗೆ ತಲುಪಿಸುವುದರ ಜೊತೆಗೆ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿಯು ತಮ್ಮ ಅವಧಿಯಲ್ಲಿ ಉತ್ತುಂಗಕೇರಿದ್ದು ತಾವು ಜನಗಳೊಂದಿಗೆ ಬೆರೆಯುವುದು, ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವುದು ಸೇರಿದಂತೆ ಹಲವಾರು ಪ್ರಗತಿಪರ ಕೆಲಸಗಳಿಂದ ಹೆಸರುವಾಸಿಯಾಗುತ್ತಿರುವ ತಮಗೆ ಕರ್ನಾಟಕ ಪ್ರೆಸ್ ಕ್ಲಬ್ ಈ ಸಾಲಿನ "ಕರ್ನಾಟಕ ಪಂಚಾಯತ್ ಐಕಾನ್" ಪ್ರಶಸ್ತಿ ನೀಡಿ ಸನ್ಮಾನಿಸಿದೆ
ಕರ್ನಾಟಕದಲ್ಲಿ ಪಂಚಾಯ್ತಿಗಳ ಅಭಿವೃದ್ಧಿ, ಗ್ರಾಮ ಸ್ವರಾಜ್ಯದ ಪರಿಕಲ್ಪನೆ, ಗಾಂಧೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಮತ್ತು ಸಂವಿಧಾನದ ಮೂಲ ಆಶಯದಂತೆ ಗ್ರಾಮಗಳ ಸಬಲೀಕರಣ ನೇರ ಆಡಳಿತಗಳಿಗೆ ಹೆಸರುವಾಸಿಯಾದ ರಾಜ್ಯದ 25 ಗ್ರಾಮ ಪಂಚಾಯಿತಿಗಳಲ್ಲಿ ತಾವು ಒಬ್ಬರಿಂದ ಹೇಳಲು ಅತಿವ ಸಂತಸವಾಗುತ್ತದೆ. ಈ ಸುಂದರ ಕಾರ್ಯಕ್ರಮವು ಬೆಂಗಳೂರಿನ ಕನ್ನಡ ಭವನದಲ್ಲಿ ನಿನ್ನೆ ಜರುಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಯಾಬಿನೆಟ್ ಸಚಿವರು, ಶಾಸಕರು, ಚಲನಚಿತ್ರ ನಟರು, ಸೇರಿದಂತೆ ಖ್ಯಾತನಾಮರು ಉಪಸ್ಥಿತರಿದ್ದರು.
BANGALORE.
Discover more from Prasarana news
Subscribe to get the latest posts sent to your email.